ಪಟ್ಟಣದಲ್ಲಿಯೇ ಹೆಚ್ಚಾಗಿ ಬೆಳೆದ ನನಗೆ ಮರಗಿಡಗಳ ಕುರಿತು ಅಷ್ಟೇನೂ ಅರಿವಿಲ್ಲ. ಜಮೀನು, ತೋಟ ಇಲ್ಲದೇ ಇರುವುದರಿಂದಲೂ ಈ ಬಗ್ಗೆ ತಿಳಿವಳಿಕೆ ತೀರಾ ಕಡಿಮೆ. ನೌಕರಿ ಸಿಕ್ಕ ನಂತರ ಸರ್ಕಾರಿ ವಸತಿ ಗೃಹಕ್ಕೆ ಸ್ಥಳಾಂತರ. ನಾವು ವಾಸಿಸುತ್ತಿದ್ದ ಬೀದಿಯಲ್ಲಿ ಒಂದು ಸಿಂಗಾಪುರ ಚೆರ್ರಿ ಹಣ್ಣಿನ ಮರವಿತ್ತು. ಪಕ್ಕದ ಮನೆಯ ಕಾಂಪೌಂಡಿನಲ್ಲಿಯೂ,ನನ್ನ ಕಛೇರಿಯ ಮುಂಭಾಗದಲ್ಲಿಯೂ ಹೀಗೆ ನಾಲ್ಕೈದು ಮರಗಳಿದ್ದವು. ಈ ಮರಗಳನ್ನು ಅಲ್ಲಿನ ಜನರು ಗಸಗಸೆ ಹಣ್ಣಿನ ಮರವೆಂದೇ ಭಾವಿಸಿದ್ದರು. ಅಲ್ಲಿಯವರೆವಿಗೂ ಕೇವಲ ಗಸಗಸೆ ಪಾಯಸ ಮಾತ್ರ ಕೇಳಿ ತಿಳಿದಿದ್ದ ನನಗೆ ಗಸಗಸೆ ಹಣ್ಣಿನ ಮರ, ಅದರ ಹಣ್ಣು ನೋಡಿ ಬಹಳ ಕುತೂಹಲವೂ ಆಶ್ಚರ್ಯವೂ ಆಯಿತು. ಆನಂತರ ತಿಳಿದು ಬಂದದ್ದೇನೆಂದರೆ ಅದರ ಹೆಸರು ಸಿಂಗಾಪುರ ಚೆರ್ರಿ ಎಂದು. ದೊಡ್ಡ ಮರವೂ ಅಲ್ಲದ ಕುಬ್ಜ ಗಿಡವೂ ಅಲ್ಲದ ಆ ಮರದ ತುಂಬ ಕೆಂಪು ಕೆಂಪು ಹಣ್ಣು. ಥೇಟ್ ಎಲಚಿ ಹಣ್ಣಿನಂತೆ ಗಾತ್ರ. ರುಚಿಯೂ ಅಷ್ಟೆ ಸ್ವಾದಿಷ್ಟ. ಹೆಚ್ಚು ತಿಂದಲ್ಲಿ ಶೀತವಾಗುತ್ತದೆಂಬ ಅಮ್ಮನ ಆತಂಕವನ್ನೂ ಲೆಕ್ಕಿಸದೆ ತಿಂದದ್ದಿದೆ. ನಮ್ಮ ಮನೆಯ ಮಕ್ಕಳೂ ಸೇರಿದಂತೆ ಹತ್ತಿರದಲ್ಲಿಯೇ ಇರುವ ಶಾಲೆಯ ಮಕ್ಕಳಿಗೂ ಇವೇ ಹಣ್ಣುಗಳೂ ಬೇಕು. ಆ ಮಕ್ಕಳು ಹಣ್ಣು ಕೀಳಲು ಮರ ಹತ್ತುವುದೇನು, ನನ್ನಮ್ಮ ಗದರುವುದೇನು..! ನೋಡಲು ತುಂಬಾ ಮಜವಾಗಿರುತ್ತಿತ್ತು.
ಇನ್ನು ಕಛೇರಿಯ ಬಳಿಯಿದ್ದ ಮರದ ನೆರಳಿನಡಿ ಅದೆಷ್ಟು ಬೈಕುಗಳು ನಿಲ್ಲುತ್ತಿದ್ದವು, ಅದೆಷ್ಟು ಜನ ತಮ್ಮ ದಣಿವಾರಿಸಿಕೊಳ್ಳಲು ಮರದಡಿ ಕೂರುತ್ತಿದ್ದರು..!ಇಷ್ಟೆಲ್ಲಾ ಸಾಲದೆಂಬಂತೆ ಆ ಮರಗಳ ರಸಭರಿತ ಹಣ್ಣುಗಳನ್ನು ತಿನ್ನಲು ಗಿಳಿ, ಮೈನಾ, ಗುಬ್ಬಚ್ಚಿ ಹೀಗೆ ತರಹೇವಾರಿ ಹಕ್ಕಿಗಳ ದಂಡೇ ಬರುತ್ತಿತ್ತು. ಅವುಗಳ ಕಲರವ ಕೇಳುವುದೇ ಒಂದು ಸೊಗಸಾಗಿತ್ತು. ಇದೆಲ್ಲದರ ಜೊತೆಗೆ ಎಲ್ಲಾ ಮರಗಳೂ ತಮ್ಮದೇ ಸ್ವಂತ ಎಂಬಂತೆ ದಾಳಿಯಿಡುತ್ತಿದ್ದ ಮಂಗಗಳ ಹಿಂಡು..!
ಹೀಗಿರುವಾಗ ನಮ್ಮ ಪಕ್ಕದ ಮನೆಯವರು ಸಂಪೊಂದನ್ನು ನಿರ್ಮಿಸಲು ಅವರ ಕಾಂಪೌಂಡಿನಲ್ಲಿದ್ದ ಈ ಹಣ್ಣಿನ ಮರವನ್ನು ಬುಡಸಮೇತ ಕಡಿಸಿದರು. ಮತ್ತೊಂದು ಮನೆಯವರು ತಾವು ಕೊಂಡ ಹತ್ತು ಲಕ್ಷದ ಕಾರನ್ನು ನಿಲ್ಲಿಸಲು ಚಪ್ಪರ ನಿರ್ಮಿಸುವ ಸಲುವಾಗಿ ಸೊಂಪಾಗಿ ಹರಡಿ ನಿಂತಿದ್ದ ಬೀದಿ ಬದಿಯ ಮರವನ್ನು ಕಡಿಸಿದರು. ಕಛೇರಿಯ ಬಳಿಯಿದ್ದ ಮರವನ್ನೂ ರಾತ್ರೋ ರಾತ್ರಿ ಯಾರೋ ಕಿಡಿಗೇಡಿಗಳು ಬುಡಸಮೇತ ಕತ್ತರಿಸಿ ಕದ್ದೊಯ್ದರು.
ಈಗ ಇಡೀ ಬೀದಿಯಲ್ಲಿ ಒಂದೂ ಸಿಂಗಾಪುರ ಚೆರ್ರಿ ಹಣ್ಣಿನ ಮರವಿಲ್ಲ, ಅದರ ನೆರಳಿಲ್ಲ,ಅದರ ಹಣ್ಣಿಲ್ಲ, ಹಕ್ಕಿಗಳಿಲ್ಲ, ಹಕ್ಕಿಗಳ ಕಲರವವಿಲ್ಲ, ಮಕ್ಕಳ ಸದ್ದಿಲ್ಲ, ಅಮ್ಮನ ಗದರಿಕೆಯಿಲ್ಲ...
ಈಗಿರುವುದೇನಿದ್ದರೂ ಆಗೊಮ್ಮೆ ಈಗೊಮ್ಮೆ ಕೇಳಿಬರುವ ಕಾರಿನ ಹಾರ್ನಿನ ಕರ್ಕಶ ಶಬ್ಧ.....ಅದೂ ಇಲ್ಲದಾಗ ನೀರವ ಮೌನ...ಸ್ವಾರ್ಥಿ ಮನುಷ್ಯ...
ಹೀಗಿರುವಾಗ ನಮ್ಮ ಪಕ್ಕದ ಮನೆಯವರು ಸಂಪೊಂದನ್ನು ನಿರ್ಮಿಸಲು ಅವರ ಕಾಂಪೌಂಡಿನಲ್ಲಿದ್ದ ಈ ಹಣ್ಣಿನ ಮರವನ್ನು ಬುಡಸಮೇತ ಕಡಿಸಿದರು. ಮತ್ತೊಂದು ಮನೆಯವರು ತಾವು ಕೊಂಡ ಹತ್ತು ಲಕ್ಷದ ಕಾರನ್ನು ನಿಲ್ಲಿಸಲು ಚಪ್ಪರ ನಿರ್ಮಿಸುವ ಸಲುವಾಗಿ ಸೊಂಪಾಗಿ ಹರಡಿ ನಿಂತಿದ್ದ ಬೀದಿ ಬದಿಯ ಮರವನ್ನು ಕಡಿಸಿದರು. ಕಛೇರಿಯ ಬಳಿಯಿದ್ದ ಮರವನ್ನೂ ರಾತ್ರೋ ರಾತ್ರಿ ಯಾರೋ ಕಿಡಿಗೇಡಿಗಳು ಬುಡಸಮೇತ ಕತ್ತರಿಸಿ ಕದ್ದೊಯ್ದರು.
ಈಗ ಇಡೀ ಬೀದಿಯಲ್ಲಿ ಒಂದೂ ಸಿಂಗಾಪುರ ಚೆರ್ರಿ ಹಣ್ಣಿನ ಮರವಿಲ್ಲ, ಅದರ ನೆರಳಿಲ್ಲ,ಅದರ ಹಣ್ಣಿಲ್ಲ, ಹಕ್ಕಿಗಳಿಲ್ಲ, ಹಕ್ಕಿಗಳ ಕಲರವವಿಲ್ಲ, ಮಕ್ಕಳ ಸದ್ದಿಲ್ಲ, ಅಮ್ಮನ ಗದರಿಕೆಯಿಲ್ಲ...
ಈಗಿರುವುದೇನಿದ್ದರೂ ಆಗೊಮ್ಮೆ ಈಗೊಮ್ಮೆ ಕೇಳಿಬರುವ ಕಾರಿನ ಹಾರ್ನಿನ ಕರ್ಕಶ ಶಬ್ಧ.....ಅದೂ ಇಲ್ಲದಾಗ ನೀರವ ಮೌನ...ಸ್ವಾರ್ಥಿ ಮನುಷ್ಯ...

.jpg)
No comments:
Post a Comment